135
ಕುಂದಾಪುರ: ಹರ್ಕೂರು ಗ್ರಾಮದ ಬಾಳೆಹಿತ್ತು ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ನಿರತ ಮೂವರನ್ನು ಗಂಗೊಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ
ಚಿತ್ತರಂಜನ್ (53), ಮಹಾಬಲ ಪೂಜಾರಿ (56), ಗಣೇಶ್ ಗಾಣಿಗ (55) ಎಂಬವರನ್ನು ಪಿಎಸ್ಐ ಪವನ್ ನಾಯಕ್ ವಶಕ್ಕೆ ತೆಗೆದುಕೊಂಡಿದ್ದಾರೆ. ಚಂದ್ರ, ರಾಜೇಂದ್ರ ದೇವಾಡಿಗ, ಬಾಲರಾಜ್ ತಪ್ಪಿಸಿ ಕೊಂಡಿದ್ದಾರೆ. 6220 ರೂ. ಮತ್ತು ಇಸ್ಪೀಟು ಎಲೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

