ಕೋಟೀಶ್ವರ : ಪಬ್ಲಿಕ್ ಸ್ಕೂಲ್ ನ ಪ್ರೌಢಶಾಲಾ ವಿಭಾಗದಲ್ಲಿ ಸಿಂವಿಧಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.ಕಾರ್ಯಕ್ರಮ ನಿಮಿತ್ತ ಅಧ್ಯಾಪಕಿ ದೀಪಿಕರವರು ಮಾತನಾಡಿ ಕರ್ತವ್ಯವನ್ನು ಪಾಲಿಸಿದಾಗ ಮಾತ್ರ ಹಕ್ಕುಗಳ ಚಲಾವಣೆಗೆ ಅರ್ಥ ಪ್ರಾಪ್ತಿಯಾಗುತ್ತದೆ.ಸಾಂವಿಧಾನಿಕ ಮೌಲ್ಯಗಳನ್ನು ನಾವು ಅಳವಡಿಸಿಕೊಂಡು ನಾವು ದೇಶಪ್ರೇಮಿ ನಾಗರಿಕರಾಗಿ ಬಾಳೋಣ ಎಂದು ಅಭಿಮತಿ ಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಶಿಕ್ಷಕಿ ಜಯಶ್ರೀ ಭಟ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಅಂಬೇಡ್ಕರರ ಜ್ಞಾನ,ದೂರದರ್ಶಿತ್ವ ಹಾಗೂ ಶೋಷಿತರ ಪರವಾದ ಕಾಳಜಿಯಿಂದ ನಮ್ಮ ಸಂವಿಧಾನ ಶ್ರೇಷ್ಠವಾದ ಸ್ಥಾನ ಪಡೆದಿದೆ ಎಂದು ಪ್ರತಿಪಾದಿಸಿದರು.ವಿದ್ಯಾರ್ಥಿಗಳು “ಏಕ ಸಂವಿಧಾನ ಶ್ರೇಷ್ಠ ಸಂವಿಧಾನ” ಎಂಬ ವಿಷಯದ ಕುರಿತಾಗಿ ಮಾತನ್ನಾಡಿದರು.
ಶಿಕ್ಷಕಿ ನಾಗರತ್ನ ಮಾರ್ಕೋಡ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ದಿವ್ಯಪ್ರಭ ರವರು ವಂದಿಸಿದರು. ಹಿರಿಯ ಶಿಕ್ಷಕ ಶ್ರೀಕಾಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಿಕ್ಷಕ ರಮಾನಂದ ನಾಯಕ್ ಸರ್ವರನ್ನು ಸ್ವಾಗತಿಸಿದರು.ಸಮಾರಂಭದಲ್ಲಿ ಶಿಕ್ಷಕ ಸಿಬ್ಬಂದಿಗಳು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸಂವಿಧಾನ ದಿನಾಚರಣೆ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.ಬಹುಮಾನಿತ ವಿದ್ಯಾರ್ಥಿಗಳ ಪಟ್ಟಿಯನ್ನು ಶಿಕ್ಷಕಿ ರಜನಿರವರು ವಾಚಿಸಿದರು.

