105
ಹೊಸದಿಲ್ಲಿ : ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸೂತ್ರಧಾರಿ, ಲಷ್ಕರ್-ಎ-ತೊಯ್ದಾ ಕಮಾಂಡರ್ ಸೈಫುಲ್ಲಾ ಕಸೂರಿ, ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ ಪುತ್ರ ತತ್ವಾ ಸಯೀದ್ ಜತೆ, ಲಾಹೋರ್ ನಲ್ಲಿ ನಡೆದ ಭಾರತ ವಿರೋಧಿ ರ್ಯಾಲಿಯಲ್ಲಿ ರಾಜಾರೋಷ ಅಡ್ಡಾಡುತ್ತಿದ್ದನೆಂದು ಇಂಡಿಯಾ ಟುಡೇ ವರದಿ ಮಾಡಿದೆ.
ಪಾತಕಿ ಕಸೂರಿ ಭಾರತ ವಿರೋಧಿ ಮತ್ತು ಜಿಹಾದಿ ಘೋಷಣೆಗಳನ್ನು ಕೂಗುತ್ತಿದ್ದ ದೃಶ್ಯವುಳ್ಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆಪರೇಷನ್ ಸಿಂದೂರ್ನಲ್ಲಿ ಭಾರತೀಯ ಯೋಧರ ಗುಂಡೇಟಿಗೆ ಹೆಣವಾದ ಭಯೋತ್ಪಾದಕರೆಲ್ಲರೂ ಹುತಾತ್ಮರೆಂದು ಪಾತಕಿ ಕಸೂರಿ ರ್ಯಾಲಿಯಲ್ಲಿ ಗುಣಗಾನ ಮಾಡುತ್ತಿದ್ದ ದೃಶ್ಯ ಕೂಡ ವಿಡಿಯೋದಲ್ಲಿದೆ. ಪಹಲ್ಲಾಮ್ ಭಯೋತ್ಪಾದಕ ದಾಳಿಯ ಸೂತ್ರಧಾರ ತಾನೆಂದು ಆರೋಪಿಸಲಾಗಿದೆ. ಇದೀಗ ತನ್ನ ಹೆಸರು ಇಡೀ ಜಗತ್ತಿಗೇ ಗೊತ್ತಾಗಿದೆ ಎಂಬ ಕಸೂರಿ ಹೇಳಿಕೆ ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.ಪಾಕಿಸ್ತಾನ್ ಮರ್ಕಝಿ ಮುಸ್ಲಿಂ ಲೀಗ್ (ಪಿಎಂಎಂಎಲ್) ರ್ಯಾಲಿ ಆಯೋಜಿಸಿತ್ತು

