Home » ರಾಜಸ್ಥಾನದ ಮಾಜಿ ಕೈ ಸಚಿವನ ಆಪ್ತ ಬಂಧನ
 

ರಾಜಸ್ಥಾನದ ಮಾಜಿ ಕೈ ಸಚಿವನ ಆಪ್ತ ಬಂಧನ

ಪಾಕ್ ಪರ ಬೇಹುಗಾರಿಕೆ

by Kundapur Xpress
Spread the love

ಜೈಸಲ್ವೇರ್ : ಗಡಿಯಾಚೆಗಿನ ಉಗ್ರರ ಸಂಹಾರದ ಬಳಿಕ ಭಾರತದ ಗಡಿಯೊಳಗಿನ ದೇಶದ್ರೋಹಿಗಳ ಬೇಟೆ ಮುಂದುವರಿದಿದೆ. ರಾಜಸ್ಥಾನದ ಜೈಸರ್‌ನಲ್ಲಿ ಕಾಂಗ್ರೆಸ್‌ ಮಾಜಿ ಸಚಿವರೊಬ್ಬರ ಆಪ್ತನಾಗಿದ್ದ ರಾಜ್ಯ ಸರ್ಕಾರಿ ನೌಕರನನ್ನು ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಶಂಕೆಯ ಮೇಲೆ ಬಂಧಿಸಲಾಗಿದೆ. ಬಂಧಿತನನ್ನು ಶಾಕುರ್ ಖಾನ್ ಎಂದು ಗುರುತಿಸಲಾಗಿದ್ದು, ಈತ ಜಿಲ್ಲಾ ಉದ್ಯೋಗ ಕಚೇರಿಯಲ್ಲಿ ಕೆಲಸ ಮಾಡುತಿದ್ದಾನೆ

ಈತನ ಮೊಬೈಲ್‌ನಲ್ಲಿ ಪಾಕ್‌ಗೆ ಸಂಬಂಧಿಸಿದ ದೂರವಾಣಿ ಸಂಖ್ಯೆಗಳು ಪತ್ತೆಯಾಗಿದ್ದು, ಪ್ರಮುಖ ಮಾಹಿತಿಗಳನ್ನು ವೈರಿ ದೇಶಕ್ಕೆ ರವಾನಿಸಿರುವ ಶಂಕೆಯಿದೆ. ಜತೆಗೆ ಕೆಲ ದಿನಗಳ ಹಿಂದೆ ಖಾನ್ 2-3 ಬಾರಿ ಪಾಕಿಸ್ತಾನಕ್ಕೆ ಹೋಗಿಬಂದಿದ್ದ ಎನ್ನಲಾಗಿದೆ.ಬಂಧಿತ ಖಾನ್, ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದ ಸಾಲೆಹ್ ಮೊಹಮ್ಮದ್ ಮತ್ತು ದಿ.ಗಾಜಿ ಫಕೀ‌ರ್ ಮತ್ತು ಅವರ ಪರಿವಾರದ ಆಪ್ತ ಎನ್ನಲಾಗಿದೆ.

 

Related Articles

error: Content is protected !!