Home » ಮಾಲೇಗಾಂವ್‌ ಸ್ಪೋಟ : ಎಲ್ಲಾ ಆರೋಪಿಗಳೂ ಖುಲಾಸೆ
 

ಮಾಲೇಗಾಂವ್‌ ಸ್ಪೋಟ : ಎಲ್ಲಾ ಆರೋಪಿಗಳೂ ಖುಲಾಸೆ

ಹಿಂದು ಭಯೋತ್ಪಾದನೆ ಪದ ಸೃಷಗಠಿಸಿದ ಕಾಂಗ್ರೇಸಿಗೆ ಮುಖಭಂಗ

by Kundapur Xpress
Spread the love

ಮುಂಬೈ : ಮುಂಬೈಯಿಂದ 200 ಕೀಮೀ ದೂರದಲ್ಲಿರುವ ಮುಸ್ಲಿಂ ಬಾಹುಳ್ಯದ ಮಾಲೇಗಾಂವ್‌ನಲ್ಲಿ 6 ಜನರನ್ನು ಬಲಿ ಪಡೆದಿದ್ದ ಬೈಕ್ ಸ್ಫೋಟ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಸೇರಿದಂತೆ ಎಲ್ಲಾ 7 ಆರೋಪಿಗಳನ್ನು ನಿರ್ದೋಷಿಗಳು ಎಂದು ಘೋಷಿಸಿ ಸ್ಥಳೀಯ ನ್ಯಾಯಾಲಯ ಗುರುವಾರ ಮಹತ್ವದ ತೀರ್ಪು ನೀಡಿದೆ.

ಆರೋಪಿಗಳ ವಿರುದ್ದ ಯಾವುದೇ ವಿಶ್ವಾಸಾರ್ಹ ಮತ್ತು ದೃಢ ಸಾಕ್ಷ್ಯಗಳಿಲ್ಲ. ಅವರು ಅನುಮಾನದ ಲಾಭ ಪಡೆಯಲು ಅರ್ಹರು  ಎಂದು ನ್ಯಾಯಾಲಯ ಹೇಳಿದೆ. ಇದರೊಂದಿಗೆ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಹಿಂದೂ ಭಯೋತ್ಪಾದನೆ, ಕೇಸರಿ ಭಯೋತ್ಪಾದನೆ ಎಂಬ ಪದ ಬಳಕೆ ಮೂಲಕ ಭಾರೀ ಟೀಕೆ ಮಾಡಿದ್ದ ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರಿಗೆ ಭಾರೀ ಮುಖಭಂಗವಾಗಿದೆ.

ನ್ಯಾಯಾಲಯದ ತೀರ್ಪು ಸತ್ಯ, ಕೇಸರಿ, ಧರ್ಮಕ್ಕೆ ಸಂದ ಜಯ ಎಂದು ಪ್ರಜ್ಞಾಸಿಂಗ್ ಸೇರಿದಂತೆ ದೋಷ ಮುಕ್ತರಾದವರು ಪ್ರತಿಕ್ರಿಯಿಸಿದ್ದರೆ, ಇದೊಂದು ಐತಿಹಾಸಿಕ ತೀರ್ಪು ಎಂದು ಬಿಜೆಪಿ ಬಣ್ಣಿಸಿದೆ. 

 

Related Articles

error: Content is protected !!