ಗುಜರಾತ್ : ಭಾರತವನ್ನು ರಕ್ಷಿಸುವ ಶಕ್ತಿಸಾಮರ್ಥ್ಯ ದೇಶದ ಸಮರ್ಥ ಸೇನಾಪಡೆಗಿದೆ ಎಂಬ ದೃಢನಂಬಿಕೆ ದೇಶವಾಸಿಗಳಿಗಿದೆ. ಈ ನಂಬಿಕೆಗೆ ಬಲವೆಂಬಂತೆ, ದೇಶದ ಗಡಿಗಳಲ್ಲಿನ ಒಂದಿಂಚು ಜಾಗದ ವಿಚಾರದಲ್ಲೂ ಭಾರತ ಸಂಧಾನದ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲವೆಂಬುದನ್ನು ತೋರಿಸಿಕೊಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ
ಭಾರತೀಯ ಸೇನೆಯನ್ನು ನೇರಾನೇರ ಕಂಡ ಕ್ಷಣವೇ ಭಾರತದ ಶತ್ರುಗಳ ದುಷ್ಪ ಸಂಚುಗಳು ನುಚ್ಚು ನೂರಾಗಲಿವೆ. ದೇಶದ ಯೋಧರಿಂದಾಗಿ ದೇಶವಿಂದು ಸುರಕ್ಷಿತವಾಗಿದೆ ಎಂಬ ಆತ್ಮವಿಶ್ವಾಸ ದೇಶದ ಜನರಲ್ಲಿ ಬಲಯುತವಾಗಿದೆ. ನಿಮ್ಮನ್ನು ಕಂಡಾಗ ದೇಶದ ಶಕ್ತಿ ಏನೆಂಬುದು ಇಡೀ ಜಗತ್ತಿಗೆ ಅರಿವಾಗುತ್ತದೆ, ಶತ್ರುಗಳು ನಿಮಗೆ ಮುಖಾಮುಖಿಯಾದ ಕ್ಷಣವೇ ಅವರ ಎಲ್ಲಾ ದುಷ್ಟ ಸಂಚುಗಳು ಹೀನಾಯವಾಗಿ ಅಂತ್ಯವಾಗಿ ಬಿಡುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ ಯೋಧರನ್ನು ಉದ್ದೇಶಿಸಿ ವಿಶ್ವಾಸ ವ್ಯಕ್ತಪಡಿಸಿದರು
ತನ್ನ ನೇತೃತ್ವದ ಸರಕಾರಕ್ಕೆ ದೇಶದ ಸೇನೆಯ ಬಾಹುಬಲ-ಶಕ್ತಿ ಸಾಮರ್ಥ್ಯದಲ್ಲಿ ತುಂಬು ನಂಬುಗೆ ಇದೆ ವಿನಾ ದೇಶದ ಶತ್ರುಗಳ ಮಾತುಗಳನ್ನು ನಂಬುವುದಿಲ್ಲ. ನಾವು ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯನ್ನು ಪ್ರತ್ಯೇಕ ಪಡೆಗಳೆಂದು ನೋಡುತ್ತೇವೆ. ಆದರೆ ಈ ಮೂರು ಪಡೆಗಳೂ ಒಟ್ಟಾದರೆ ಇವುಗಳ ಶಕ್ತಿ ಬಹುಪಟ್ಟಾಗುವುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ತನ್ನ ಸರಕಾರ ಪ್ರಾಧಾನ್ಯತೆ ನೀಡಿದೆ ಎಂದು ಪ್ರಧಾನಿ ಹೇಳಿದರು.
ದೇಶದ ಗಡಿಯಲ್ಲಿನ ಒಂದಿಂಚು ಭೂಮಿಯ ವಿಚಾರದಲ್ಲೂ ಯಾರೊಂದಿಗೂ ಸಂಧಾನದ ಮಾತೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದರು.

