ಮಹಾಕುಂಭ ನಗರ : ಪ್ರಯಾಗರಾಜ್ನ ಮಹಾಕುಂಭ ಮೇಳವು ತನ್ನನ್ನು ಅತ್ಯಂತ ಭಕ್ತಿಭಾವ ಪರವಶಗೊಳಿಸಿದ್ದು, ಇದರಲ್ಲಿ ಪಾಲ್ಗೊಳ್ಳುವ ಮೂಲಕ ತಾನು ಧನ್ಯನಾದೆ. ದೇವರ ಅನುಗ್ರಹಕ್ಕೆ ಪಾತ್ರನಾದೆ. ಪವಿತ್ರ ಸಂಗಮಸ್ಥಾನದಲ್ಲಿ ಮಿಂದೇಳುವಾಗ ‘ದೇವರ ಬಳಿ ನಾವಿರುವ ವಿಶೇಷ ಅನುಭವವಾಗುತ್ತೆ. ಕೋಟ್ಯಂತರ ಭಕ್ತರ ಅನುಭವವೂ ಇದೇ ಆಗಿರುವುದು ಎಂದು ಬುಧವಾರ ತ್ರಿವೇಣಿ ಸಂಗಮದಲ್ಲಿ ತೀರ್ಥಸ್ಥಾನ ಮಾಡಿದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗಂಗೆ, ಯಮುನೆ, ಸರಸ್ವತೀ ಮಾತೆಯರ ಸಂಗಮ ಸ್ಥಾನದಲ್ಲಿ ತೀರ್ಥಸ್ನಾನಕ್ಕಿಳಿದ ಪ್ರಧಾನಿ ಕಡು ಕೇಸರಿ ಬಣ್ಣದ ಜಾಕೆಟ್ ಮತ್ತು ಕಡು ನೀಲವರ್ಣದ ಪೈಜಾಮ ಧರಿಸಿದ್ದರು. ಅವರ ಕೊರಳು ರುದ್ರಾಕ್ಷಿಅಲಂಕರಿಸಿದ್ದವು ರುದ್ರಾಕ್ಷಿ ಹಾರಗಳು. ವಿಶೇಷವಾದ ಮಂತ್ರಜಪ ಮಾಡುತ್ತಲೇ ಆದಿತ್ಯದೇವ ಮತ್ತು ಗಂಗಾಮಾತೆಗೆ ಕೈಮುಗಿದು ಪ್ರಾರ್ಥಿಸಿದರು
ಸಂಗಮಕ್ಕೆ ಬೋಟಲ್ಲಿ ಪಯಣ: ಸುಮಾರು 90ನಿಮಿಷಗಳ ಪಯಣದವಧಿಯಲ್ಲಿ ಪ್ರಧಾನಿ ರಸ್ತೆ ಯಾನ ಮಾಡಿದ್ದು ಕಡಿಮೆ ಅವಧಿಗೆ ಅಥವಾ ಕಾರಲ್ಲಿ 3ಕಿಮೀ ಪಯಣಿಸಿ ಬೆಳಗ್ಗೆ 10.30ಕ್ಕೆ ಪ್ರಯಾಗ್ರಾಜ್ ವಿಮಾನ ನಿಲ್ದಾಣ ತಲುಪಿದರು. ಅಲ್ಲಿಂದ ಸಂಗಮಸ್ಥಾನ ಬಳಿಯ ಹೆಲಿಪ್ಯಾಡ್ಗೆ ಹೆಲಿಕಾಪ್ಟರ್ನಲ್ಲಿ ಬಂದಿಳಿದರು. ನಂತರ ಅರೈಲ್ ಘಾಟ್ನಿಂದ ಮೋಟಾರ್ಬೋಟ್ನಲ್ಲಿ ಪವಿತ್ರ ತ್ರಿವೇಣಿ ಸಂಗಮ ತಲುಪಿದ್ದರು

