126
ನವದೆಹಲಿ : ಮುಸ್ಲಿಮರಿಗೂ ಬಿಜೆಪಿಗೂ ಅಷ್ಟಕ್ಕಷ್ಟೆ ಎಂಬ ಭಾವನೆಗಳು ಜನರ ಮನಸ್ಸಿನಲ್ಲಿ ಇರುವ ನಡುವೆಯೇ 32 ಲಕ್ಷ ಬಡ ಮುಸ್ಲಿಮರ ಕುಟುಂಬಗಳಿಗೆ ಬಿಜೆಪಿ ದೇಶಾದ್ಯಂತ ವಿಶೇಷ ‘ರಂಜಾನ್ ಕಿಟ್’ ನೀಡಲು ಆರಂಭಿಸಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಮಾರ್ಗದ ರ್ಶನದಲ್ಲಿ ಆಗ್ನೆಯ ದೆಹಲಿಯ ನಿಜಾಮುದ್ದೀನ್ನಿಂದ ಕಿಟ್ ವಿತರಣೆ ಆರಂಭವಾಗಿದೆ.
‘ಸೌಗತ್-ಎ-ಮೋದಿ’ ಎಂದು ಅಭಿಯಾನಕ್ಕೆ ಹೆಸರಿಡಲಾಗಿದೆ. ದೇಶಾದ್ಯಂತ 32 ಲಕ್ಷ ಹಿಂದುಳಿದ ಮುಸ್ಲಿಮರಿಗೆ ಪ್ರಯೋಜ ನವನ್ನು ನೀಡುವ ನಿರೀಕ್ಷೆಯಿದೆ,
ಇದರ ಅಂಗವಾಗಿ ಅವರಿಗೆ ಈದ್ ಆಚರಿ ಸಲು ವಿಶೇಷ ಕಿಟ್ ನೀಡಲಾಗುತ್ತದೆ. ಅದರಲ್ಲಿ ಆಹಾರ ಪದಾರ್ಥಗಳ ಜೊತೆಗೆ, ಕಿಟ್ಗಳಲ್ಲಿ ಬಟ್ಟೆ, ಶಾವಿಗೆ, ಖರ್ಜೂರ, ಒಣ ಹಣ್ಣುಗಳು ಮತ್ತು ಸಕ್ಕರೆ ಇವೆ. ಮಹಿಳೆಯರಿಗೆ ಸೀರೆ, ಸಲ್ವಾರ್ ಕಮೀಜ್, ಪುರುಷರಿಗೆ ಕುರ್ತಾ-ಪೈಜಾಮಗಳನ್ನು ನೀಡಲಾಗುತ್ತದೆ

