145
ಬೆಂಗಳೂರು : ಯುದ್ಧದಿಂದ ಎರಡೂ ಕಡೆಯ ಸೇನೆಗೆ ಅಪಾರ ನಾಶವಾಗುತ್ತದೆ. ಹೀಗಾಗಿ ಸಜ್ಜನರಿಗೆ ಹಾನಿಯಾಗದಂತೆ ದುಷ್ಟರ ಸಂಹಾರ ಮಾಡಿದ ಪರಶುರಾಮ ದೇವರಂತೆ ಸರ್ಕಾರವು ದುಷ್ಟರನ್ನು ಹುಡುಕಿ ಹುಡುಕಿ ಸಂಹಾರ ಮಾಡಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಮಂಗಳವಾರ ರಾಜಾಜಿನಗರದ ರಾಮಮಂದಿರದಲ್ಲಿ ಪರಶುರಾಮ ಜಯಂತಿ, ಸೈನಿಕರು ಸುರಕ್ಷತೆಗಾಗಿ ಯಜ್ಞ ಹಾಗೂ ಶೋಭಾಯಾತ್ರೆಯಲ್ಲಿ ಮಾತನಾಡಿದರು. ಲೋಕಕಲ್ಯಾಣಕ್ಕಾಗಿ ಪರಶುರಾಮ ದೇವರು ಹುಡುಕಿ ಹುಡುಕಿ ದುಷ್ಟರನ್ನು ಸಂಹರಿಸಿದರು. ನಮ್ಮ ಸರ್ಕಾರ ಅದೇ ರೀತಿ ದುಷ್ಟರನ್ನು ಕೂಂಬಿಂಗ್ ಮಾಡಿ ಸಂಹರಿಸಬೇಕು. ದುಷ್ಟರ ವಿರುದ್ಧ ಹೋರಾಡಲು ತೆರಳುತ್ತಿರುವ ನಮ್ಮ ಸೈನಿಕರಿಗೆ ಪರಶುರಾಮನಂತಹ ಶಕ್ತಿ, ಧೈರ್ಯ ಸಿಗಲಿ ಎಂಬ ಆಶಯದೊಂದಿಗೆ ಯಜ್ಞ ಮಾಡಿದ್ದೇವೆ ಎಂದರು.

