90
ಹೊಸಂಗಡಿ : ಗ್ರಾಮದ ಶ್ರೀಕೃಷ್ಣ ಜ್ಯೂವೆಲ್ರಿಯರಿಗೆ ಬಂದ ವ್ಯಕ್ತಿ, ತನ್ನನ್ನು ಸಂತೋಷ ಎಂದು ಪರಿಚಯಿಸಿಕೊಂಡು, ಉಡುಗೊರೆಯ ನೆಪದಲ್ಲಿ ಎರಡು ಚಿನ್ನದ ಉಂಗುರಗಳನ್ನು ಖರೀದಿಸಿದ್ದ. ಉಂಗುರಗಳ ಮೌಲ್ಯ 30 ಸಾವಿರ ರೂಪಾಯಿ. ಬ್ಯಾಂಕ್ Neft ಮೂಲಕ ಹಣ ವರ್ಗಾವಣೆ ಮಾಡಿರುವುದಾಗಿ ಮೊಬೈಲ್ನಲ್ಲಿ ತೋರಿಸಿ ಉಂಗುರಗಳನ್ನು ತೆಗೆದುಕೊಂಡು ಹೋದ ಆತ, ನಂತರ ಹಣ ಖಾತೆಗೆ ಜಮಾ ಆಗದೆ ಮೋಸ ಮಾಡಿದ ವಿಷಯ ಬಹಿರಂಗವಾಗಿದೆ.
ಪುನಃ ವಿಚಾರಿಸಿದಾಗ ನಾಳೆ ಕೊಡುತ್ತೇನೆ, ನಾಡಿದ್ದು ಕೊಡುತ್ತೇನೆ ಎಂದು ತಪ್ಪಿಸಿಕೊಂಡ ಆತ, ವಾಸ್ತವವಾಗಿ ಪ್ರವೀಣ ಎಂಬುದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ವಂಚನೆ ಮಾಡಿದ ಆರೋಪದಲ್ಲಿ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಕಾರಿನೊಂದಿಗೆ ತಲೆಮರೆಸಿಕೊಂಡಿದ್ದಾನೆ.
ಆರೋಪಿಯನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಹಾಗೂ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

