119
ಕುಂದಾಪುರ: ತಾಲೂಕಿನ ಶ್ರೀ ಸೀತಾ ರಾಮಚಂದ್ರ ದೇವಸ್ಧಾನದಲ್ಲಿ ರಾಮಕ್ಷತ್ರಿಯ ಮಹಿಳಾ ಮಂಡಳಿ ವತಿಯಿಂದ ಶ್ರೀ ಶಾರದಾ ದೇವಿಯ ವಿಗ್ರಹವನ್ನು ತಂದು ಪ್ರತಿಷ್ಠಾಪಿಸಲಾಯಿತ್ತು.
ಬೆಳಿಗ್ಗೆ 9.೦೦ಕ್ಕೆ ಗಣಪತಿ ಪ್ರಾರ್ಥನೆ, ದುರ್ಗಾಹೋಮ, ಸ್ವಸ್ತಿ ಪಂಚಗವ್ಯ, ಪುರಸ್ಸರ ಪುಣ್ಯಾಹ ವಾಚನ, ಗಣಯಾಗ ನೆರವೇರಿತ್ತು, ಮಧ್ಯಾಹ್ನ 12.00ಕ್ಕೆ ಸಪ್ತಶತಿ ಪಾರಾಯಣ ಹಾಗೂ ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ ನಂತರದಲ್ಲಿ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೇರವೇರಿತ್ತು.ಸಂಜೆ 6.00ಕ್ಕೆ ಸರಿಯಾಗಿ ಜಿಲ್ಲಾಮಟ್ಟದ ಸಾಂಸ್ಕೃತಿಕ ಸಮೂಹ ನೃತ್ಯ ಸ್ಪರ್ಧೆ ನಡೆಯಿತು.


ಕಾರ್ಯಕ್ರಮದಲ್ಲಿ ರಾಮಕ್ಷತ್ರಿಯ ಸಂಘ(ರಿ.), ರಾಮಕ್ಷತ್ರಿಯ ಯುವಕ ಮಂಡಳಿ ಹಾಗೂ ಮಹಿಳಾ ಮಂಡಳಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

