ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯ 66 ರಲ್ಲಿ ಕೆಲವು ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜೊತೆ ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಗಿಯವರು ಅಧಿಕಾರಿಗಳೊಂದಿಗೆ ಚರ್ಚೆ ಮಾಡಲು ಎನ್ಎಚ್ 66 ರಲ್ಲಿರುವ ಸಮಸ್ಯೆಗಳಲ್ಲಿ ಹೊಸದಾಗಿ ಜಿಪಿಆರ್ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು.
ಪಡುಬಿದ್ರೆ ಉಡುಪಿಯ ಅಂಬಾಗಿಲು ಬ್ರಹ್ಮಾವರ ಕೋಟ ಜಂಕ್ಷನ್ ತೆಕ್ಕಟ್ಟೆ ಒಟ್ಟು 4-5 ಜಂಕ್ಷನ್ ಗಳಲ್ಲಿ ಮೇಲ್ ಸೇತುವೆ ಮಾಡಬೇಕಾಗಿರುವುದರಿಂದ ಹೊಸದಾಗಿ ಎರಡು ಕಂಪನಿಗಳಿಗೆ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟ
ಜಿಪಿಆರ್ ಮಾಡಲು ಅವಕಾಶ ಕಲ್ಪಿಸಿದ್ದು ಅದರ ಜೊತೆಯಲ್ಲಿ ಹೆಜಮಾಡಿ ಯಿಂದ ಕುಂದಾಪುರ ಶಾಸ್ತ್ರಿ ಸರ್ಕಲ್ ತನಕ ಸುಮಾರು 64 ಕಿಲೋಮೀಟರ್ ಸರ್ವಿಸ್ ರಸ್ತೆ ಮಾಡಬೇಕೆನ್ನುವ ಬೇಡಿಕೆ ಹಿನ್ನೆಲೆ ಅನುಗುಣವಾಗಿ ಸುಮಾರು 29 ಕಿಲೋಮೀಟರ್ ಮಂಜೂರಾಗಿ ಪ್ರಸ್ತುತ ಕಾಮಗಾರಿ ಆಗ್ತಾ ಇದೆ ಇನ್ನು 25-30 km ಸರ್ವಿಸ್ ರಸ್ತೆ ಹೊಸದಾಗಿ ಪ್ರಸ್ತಾಪನೆ ಬಂದಿದ್ದು ಅದು ಕೂಡ ಆಗುತ್ತೆ.
ಇದರಲ್ಲಿ ಹೆಜಮಾಡಿಯಿಂದ ಕುಂದಾಪುರದವರೆಗಿನ ರಾಷ್ಟ್ರೀಯ ಹೆದ್ದಾರಿ ಅಲ್ಲಿನ ಎರಡು ಕಡೆಯಿಂದ ಸರ್ವಿಸ್ ರಸ್ತೆ ಅಗಲೀಕರಣ ಆಗ್ತಾ ಇರುವುದರಿಂದ ಮತ್ತೆ ಇರುವಂತಹ ರಸ್ತೆ ಕೂಡ ಅಗಲ ಬಂದ ರೀತಿ ಜನರಿಗೆ ಹಾಗೂ ಅನೇಕ ದೇವಸ್ಥಾನಗಳಿಗೆ ತೊಂದರೆ ಆಗುತ್ತೆ ವ್ಯಾಪಾರಗಳಿಗೆ ತೊಂದರೆ ಆಗುತ್ತೆ ಕೆಲವು ಸಮಸ್ಯೆಗಳು ಆಗಿರುವುದು ಸತ್ಯ.
ಅದರ ಮಧ್ಯದಲ್ಲಿಯೂ ಕೂಡ ಹೆಜಮಾಡಿ ದಿಂದ ಕುಂದಾಪುರದವರೆಗೆ ದಿನನಿತ್ಯ ಅನೇಕ ಆಕ್ಸಿಡೆಂಟ್ ಆಗ್ತಾ ಇದೆ ಎಂಬ ವರದಿ ಹಿನ್ನೆಲೆಯಲ್ಲಿ ಅಪಘಾತಗಳನ್ನು ನಿಯಂತ್ರಣ ತರಲಿಕ್ಕೆ ಮತ್ತು ಕೆಲವು ಕಡೆ ಮೇಲ್ ಸೇತುವೆ ಅಗಲಕ್ಕೆ ಹಾಗೆ ಕೆಲವು ಕಡೆ ಸರ್ಕಲ್ ಮಾಡಲಿಕ್ಕೆ ಇವತ್ತು ಅನುಮತಿ ಪಡೆದುಕೊಂಡು ಈ ಕಾಮಗಾರಿಯನ್ನು ಇಂದು ನಾನು ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರದ *ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿಯವರು ಜೊತೆ ಸೇರಿಕೊಂಡು ಕಾಮಗಾರಿಯನ್ನು ಪರಿಶೀಲನೆ ಮಾಡಿ ಈ ಮೂಲಕ ಸಾರ್ವಜನಿಕರ ಕೆಲವೊಂದು ಸಮಸ್ಯೆಗಳನ್ನು ಅವಲೋಕಿಸಿ , ಕೆಲವು ಸಣ್ಣಪುಟ್ಟ ಅಡಚಣೆ ಇದ್ದರೂ ಕೂಡ ಸಂಚಾರ ಸುಗಮವಾಗಲಿಕ್ಕೆ ಸಾರ್ವಜನಿಕರ ಸಹಕಾರ ಮಾಡಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿಕೊಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರಾಗಿಣಿ ದೇವಾಡಿಗ, ಬಿಜಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷ ಪ್ರಕಾಶ್ ಜಿ ಪೂಜಾರಿ, ಗೋಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷ
ಆನಂದ ಪೂಜಾರಿ ಹಾಗೂ ಪ್ರಮುಖರಾದ ಸತೀಶ್ ಪೂಜಾರಿ ವಕ್ವಾಡಿ,ಸುಧೀರ್ ಕೆ ಎಸ್, ಕೃಷ್ಣಗೊಲ್ಲ,ಸುರೇಶ್ ಕುಂದರ್,ವಿಟ್ಟಲ್ ಪೂಜಾರಿ ಐರೋಡಿ, ಶಾಸಕರ ಆಪ್ತ ಕಾರ್ಯದರ್ಶಿ ಮಹಿಮ ಶೆಟ್ಟಿ ಕೆ, ಸಂಸದರ ಆಪ್ತ ಕಾರ್ಯದರ್ಶಿ ಹರೀಶ್ ಶೆಟ್ಟಿ ಹಾಗೂಆರ್ಕಿಟೆಕ್ ಇಂಜಿನಿಯರ ಶ್ರೀಮತಿ ಆಶಿಕ, ನಾಸಿರ್,ನ್ಯಾಷನಲ್ ಆರ್ಕಿಟೆಕ್ ಪ್ರಾಜೆಕ್ಟ್ ಇಂಜಿನಿಯರ್ ಚಂದ್ರಶೇಖರ ಸೈಟ್ ಇಂಜಿನಿಯರ್ ಸಂಜಯ್ ಮತ್ತು ನಾಲ್ಕು ಗ್ರಾಮ ಪಂಚಾಯಿತಿನ ಸದಸ್ಯರು, ಸಾರ್ವಜನಿಕರು,, ಪಕ್ಷದ ವಿವಿಧ ಕ್ಷೇತ್ರದ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

