Home » ಸೇವಾ ಸಂಗಮ ವಿದ್ಯಾಕೇಂದ್ರ ತೆಕ್ಕಟ್ಟೆಯ ವಿದ್ಯಾರ್ಥಿನಿ : ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಆಯ್ಕೆ
 

ಸೇವಾ ಸಂಗಮ ವಿದ್ಯಾಕೇಂದ್ರ ತೆಕ್ಕಟ್ಟೆಯ ವಿದ್ಯಾರ್ಥಿನಿ : ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಆಯ್ಕೆ

by Kundapur Xpress
Spread the love

ತೆಕ್ಕಟ್ಟೆ :ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ವತಿಯಿಂದ ನೀಡುವ 5ನೇ ವರ್ಷದ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾಕೇಂದ್ರದ ಗೀತಾ ಹೆಗ್ಡೆ ಆಯ್ಕೆಯಾಗಿದ್ದಾರೆ.
ಬಹುಮುಖ ಬಾಲಪ್ರತಿಭೆಯಾದ ಗೀತಾ ಹೆಗ್ಡೆ ವಿದ್ಯಾ ಭಾರತಿ ಕರ್ನಾಟಕ ನಡೆಸುವ ಚೆಸ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟವನ್ನು 2ಬಾರಿಪ್ರತಿನಿಧಿಸಿದ್ದಲ್ಲದೆ, ತೃತೀಯ ಸ್ಥಾನ ಪಡೆದಿದ್ದು,ಅತ್ಯುತ್ತಮ ವಾಗ್ಮಿ, ಚಿತ್ರಕಲಾವಿದೆ, ಉತ್ತಮ ಭಾಷಣಕಾರ್ತಿ , ನಿರೂಪಕಿ ಹಾಗೂ ಭಗವದ್ಗೀತೆ ಪಠಣ ವಾಚಕಿಯಾಗಿ, ‌ಭಾಗವಹಿಸಿದ ಪ್ರತೀ ಸ್ಫರ್ಧೆಗಳಲ್ಲೂ ಜಿಲ್ಲಾ ಹಾಗೂ ರಾಜ್ಯ ಮಟ್ಟವನ್ನು ಪ್ರತಿನಿಧಿಸಿದ ಬಹುಮುಖ ಪ್ರತಿಭೆ. ವಿದ್ಯಾರ್ಥಿಯ ಈ ಸಾಧನೆಗೆ ತಂದೆತಾಯಿಯ ನಿರಂತರ ಪ್ರೋತ್ಸಾಹವೇ ಕಾರಣವಾಗಿದ್ದು, ಶಾಲೆಯಲ್ಲಿ ಹೆಮ್ಮೆಯ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡಿದ್ದಾಳೆ.
ಇದೇ 30ರಂದು ಕೋಟ ಕಾರಂತ ಥೀಮ್ ಪಾಕ್೯ನಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಡೆಯಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

 

Related Articles

error: Content is protected !!