555
ಕುಂದಾಪುರ : ಕುಂದಾಪುರ ನಗರ ಸಮೀಪದ ಆನಗಳ್ಳಿ ಸೇತುವೆ ಬಳಿಯಲ್ಲಿ ಸಾಗುವ ರಿಂಗ್ ರಸ್ತೆಯ ಗಂಗಾವಳಿ ನದಿಯಲ್ಲಿ ಅಪರಿಚಿತ ಮೃತದೇಹವೊಂದು ಪತ್ತೆಯಾಗಿದೆ
ಅಪರಿಚಿತ ಗಂಡಸಿನ ಮೃತದೇಹವು ಜರ್ಜರಿತವಾಗಿದ್ದು ಹಲವು ಬಾಗಗಳು ಕೊಳೆತಿದ್ದು ಸುಮಾರು ದಿನಗಳ ಹಿಂದೆಯೇ ನದಿಗೆ ಬಿದ್ದಿರಬೇಕೆಂದು ಶಂಕಿಸಲಾಗಿದೆ
ಮೃತದೇಹವನ್ನು ಕುಂದಾಪುರ ಪೊಲೀಸರು ಸರಕಾರಿ ಅಸ್ಪತ್ರೆಗೆ ಸಾಗಿಸಿದ್ದಾರೆ ಆದರೆ ಮೃತದೇಹವು ಕೊಳೆತ ಸ್ಥಿತಿಯಲ್ಲಿರುವುದರಿಂದ ಮಣಿಪಾಲದ ಆಸ್ಪತ್ರೆಯ ಶವಾಗಾರಕ್ಕೆ ಗಜೇಂದ್ರ ಎಂಬವರ ಅಂಬುಲೆನ್ಸ್ ಮೂಲಕ ಸಾಗಿಸಲಾಗಿದೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಾರೀಸುದಾರರು ಕುಂದಾಪುರ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ

