Home » ಸುಹಾಸ್‌ ಶೆಟ್ಟಿ ಕೊಲೆ ಆರೋಪಿಯ ಮೇಲೆ ಹಲ್ಲೆ ಯತ್ನ
 

ಸುಹಾಸ್‌ ಶೆಟ್ಟಿ ಕೊಲೆ ಆರೋಪಿಯ ಮೇಲೆ ಹಲ್ಲೆ ಯತ್ನ

by Kundapur Xpress
Spread the love

ಮಂಗಳೂರು : ಸದಾ ಸುದ್ದಿಯಲ್ಲಿರುವ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ಕೈದಿಗಳ ನಡುವೆ ಸಂಘರ್ಷ ನಡೆದಿದೆ. ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯ ಪ್ರಮುಖ ಆರೋಪಿ ನೌಷಾದ್ ಮೇಲೆ ಮಂಗಳೂರು ಜೈಲಲ್ಲಿ ಸಹ ಕೈದಿಗಳಿಂದ ದಾಳಿ ಯತ್ನ ನಡೆದಿದೆ

ಪ್ರಕರಣದ ಪ್ರಮುಖ ಆರೋಪಿ ನೌಷಾದ್ ಎಂಬಾತನ ಮೇಲೆ ಜೈಲಿನ ಖೈದಿಗಳು ಕಲ್ಲು ತೂರಾಟ ನಡೆಸಿದ್ದು, ಈ ವೇಳೆ ನೌಷಾದ್ ಅಪಾಯದಿಂದ ಪಾರಾಗಿದ್ದಾನೆ. ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ನೌಷಾದ್‌ನನ್ನುಮಂಗಳೂರಿಗೆ ಜೈಲಿಗೆ ಕರೆ ತರಲಾಗಿತ್ತು. ದಾಳಿಯ ಮುನ್ಸೂಚನೆ ಮೊದಲೇ ಇದ್ದುದರಿಂದ ಆತನನ್ನು ಮೈಸೂರು ಜೈಲಿಗೆ ಕಳುಹಿಸಲು ಹಿಂದೆಯೇ ನಿರ್ಧರಿಸಲಾಗಿತ್ತು.ಅದಕ್ಕೂ ಮೊದಲು  ಮಂಗಳೂರು ಜೈಲಿಗೆ ಕರೆತರಲಾಗಿತ್ತು. ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿಯನ್ನು ತಪ್ಪಿಸಿದ್ದಾರೆ.

 

Related Articles

error: Content is protected !!