53
ಮುಂಬೈ : ನನ್ನ ಇಡೀ ಜೀವನಕ್ಕೆ ಕಳಂಕ ತರಲಾಗಿತ್ತು. ಜೀವನ ಹಾಳಾಗಿತ್ತು. ಆದರೆ ಸನ್ಯಾಸಿನಿಯಾಗಿದ್ದ ಕಾರಣ ನಾನು ಬದುಕಲು ಸಾಧ್ಯವಾಯಿತು. ಪ್ರಕರಣದಲ್ಲಿ ನಾನೊಬ್ಬಳೇ ಅಲ್ಲ, ಕೇಸರಿ ಪಡೆ (ಭಗವಾ)ಯೂ ಹೋರಾಡಿತು. ಇಂದು ಕೇಸರಿಗೆ ಜಯವಾಗಿದೆ. ಭಗವಾ ಅವಮಾನಿಸಿದವರನ್ನು ಭಗವಂತನೇ ಶಿಕ್ಷಿಸುತ್ತಾನೆ ಎಂದು ಪ್ರಜ್ಞಾ ಠಾಕೂರ್ ಪ್ರತಿಕ್ರೀಯಿಸಿದ್ದಾರೆ
ಸೋನಿಯಾ, ರಾಹುಲ್ ಗಾಂಧಿ ಕ್ಷಮೆ ಕೇಳಲಿ
ಗುಜರಾತ್ನಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಮೋದಿ ಅವರ ಎಳಿಗೆ ಸಹಿಸಲಾಗದೆ ಮತ್ತು ಮುಸ್ಲಿಮರನ್ನು ಓಲೈಸುವ ಸಲುವಾಗಿ ಕಾಂಗ್ರೆಸ್ ನಾಯಕರು ಮಾಲೇಗಾಂವ್ ಸ್ಪೋಟವನ್ನು ಹಿಂದೂ ಭಯೋತ್ಪಾದನೆ ಎಂದು ಬಣ್ಣಿಸಿದ್ದರು. ಇಂಥ ಸಿದ್ಧಾಂತ ಸೃಷ್ಟಿಸಿದ್ದಕ್ಕೆ ಸೋನಿಯಾ, ರಾಹುಲ್ ಕ್ಷಮೆ ಕೇಳಬೇಕು.
- ರವಿಶಂಕರ್ ಪ್ರಸಾದ್ ಬಿಜೆಪಿ ವಕ್ತಾರ

