166
ಕೋಟ : ಸಾಸ್ತಾನದಲ್ಲಿ ಮೂರು ದಿನಗಳ ಕಾಲ ನಡೆಯುವ ವೈಭವದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ಅಂಗವಾಗಿ ಕೋಟ ಹದಿನಾಲ್ಕು ಗ್ರಾಮಗಳ ವಿವಿಧ ಭಾಗಗಳಿಂದ ಹೊರೆಕಾಣಿಕೆ ಸಾಸ್ತಾನದ ಮುಖ್ಯಪೇಟೆಯಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು
ಹೊರೆಕಾಣಿಕೆಯು ಕಲ್ಯಾಣೋತ್ಸವ ನಡೆಯುವ ಸ್ಥಳ ಪ್ರವೇಶಿಸುತ್ತಿದ್ದಂತೆ ಸಮಿತಿಯ ಮಾರ್ಗದರ್ಶಕ ಡಾ.ವಿದ್ವಾನ್ ವಿಜಯ್ ಮಂಜರ್,ಗೌರವಾಧ್ಯಕ್ಷ ಆನಂದ್ ಸಿ ಕುಂದರ್ ,ಸಮಿತಿ ಅಧ್ಯಕ್ಷ ಎಂ.ಸಿ ಚಂದ್ರಶೇಖರ್ ,ಪ್ರದಾನಕಾರ್ಯದರ್ಶಿ ಐರೋಡಿ ವಿಠ್ಠಲ ಪೂಜಾರಿ ಸಮ್ಮುಖದಲ್ಲಿ ಪೂಜಾ ವಿಧಿಗಳ ಮೂಲಕ ಸ್ವಾಗತಿಸಿಕೊಳ್ಳಲಾಯಿತು. ಚಂಡೆ ವಾದನ ಸೇರಿದಂತೆ ವಾದ್ಯಘೋಷಗಳು ಮೆರವಣಿಗೆ ಕಂಡು ಬಂದವು.

