66
ಕುಂದಾಪುರ : ಶಂಕರನಾರಾಯಣ : ಎಸ್.ಎಸ್.ಎಲ್.ಸಿ.ಫಲಿತಾಂಶದ ಲ್ಲಿ 625ಕ್ಕೆ 625 ಅಂಕಗಳ ಸಾಧನೆ ಮಾಡಿದ ಕುಂದಾಪುರ ತಾಲೂಕಿನ ಶಂಕರನಾರಾಯಣದ ಮದರ್ ತೆರೆಸಾ ಮೆಮೋರಿಯಲ್ ಶಾಲೆಯ ವಿದ್ಯಾರ್ಥಿ ಪ್ರೀತಮ್ ಜಿ. ಪೂಜಾರಿ 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಜಿಲ್ಲೆ ಮತ್ತು ಶಾಲೆಗೆ ಕೀರ್ತಿ ತಂದಿದ್ದು ಅವರಿಗೆ ಇಂದು ಕುಂದಾಪುರದ ವಿಧಾನಸಭಾ ಕ್ಷೇತ್ರದ *ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಗಿಯವರು* ಪ್ರೀತಮ್ ಪೂಜಾರಿ ಅವರನ್ನು ಅಭಿನಂದಿಸಿ ಸಿಹಿ ನೀಡುವುದರ ಮುಖಾಂತರ ಈ ಪ್ರತಿಭೆ ಸಾಧನೆಯನ್ನ ಶ್ಲಾಘಿಸಿ ಇವರು ಈ ಯಶಸ್ಸು ಮುಂದಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ ಪ್ರೀತಮ್ ಪೂಜಾರಿಯವರ ಮುಂದಿನ ಎಲ್ಲ ಕನಸುಗಳು ಈಡೇರಲಿ ಎಂದು ಮಾತನಾಡಿದ ಶಾಸಕರು ಕಡು ಬಡತನ ನಡುವೆಯೂ ಮಗನ ಶಿಕ್ಷಣಕ್ಕೆ ಬೆನ್ನೆಲುಬಾಗಿ ನಿಂತಿರುವ ತೊಂಭಟ್ಟು ಕಸಿನಪಾಳು ಗಣಪತಿ ಪೂಜಾರಿ ಮತ್ತು ನಾಗರತ್ನ ದಂಪತಿಗಳಿಗೆ ಹಾಗೂ ಶಂಕರ್ ನಾರಾಯಣ ಮದರ್ ತೆರೇಸಾ ಶಾಲಾ ಆಡಳಿತ ಮಂಡಳಿಗೂ ಮತ್ತು ಅಧ್ಯಾಪಕವಂದದವರಿಗೆ ಶುಭ ಹಾರೈಸಿದರು.

