174
ಕುಂದಾಪುರ : ಕುಂದಾಪುರ ನಗರ ಸಮೀಪದ ಮೂರುಕೈ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಮ್ನಿಯೊಂದು ಪಾದಾಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಮೃತ ವ್ಯಕ್ತಿಯನ್ನು ಬೀಜಾಡಿ ನಿವಾಸಿ ಚಂದ್ರ ಪೂಜಾರಿ (55ವರ್ಷ) ಎಂದು ಗುರುತಿಸಲಾಗಿದೆ
ಚಂದ್ರ ಪೂಜಾರಿಯವರು ಹೋಟೇಲ್ನಲ್ಲಿ ಕೆಲಸ ಮುಗಿಸಿ ಮನೆಗೆ ಹೋಗಲು ರಸ್ತೆ ಬದಿ ನಡೆದುಕೊಂಡು ಹೋಗುವಾಗ ವಾಹನ ಢಿಕ್ಕಿ ಹೊಡೆದಿದ್ದು ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಅವರು ಪತ್ನಿಸೀತಾ ಪೂಜಾರ್ತಿ ಬೀಜಾಡಿ ಪಂಚಾಯತ್ ಸದಸ್ಯೆಯಾಗಿದ್ದು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

