Home » ವಿದುಷಿ ಶ್ರೀಮತಿ ಭಾಗೀರಥಿ ಎಮ್. ರಾವ್‌ ರವರ ಶಿಷ್ಯ : ಕುಮಾರಿ ಸಮೀಕ್ಷಾ ಹಕ್ಲಾಡಿ ಭರತನಾಟ್ಯ ರಂಗಪ್ರವೇಶ
 

ವಿದುಷಿ ಶ್ರೀಮತಿ ಭಾಗೀರಥಿ ಎಮ್. ರಾವ್‌ ರವರ ಶಿಷ್ಯ : ಕುಮಾರಿ ಸಮೀಕ್ಷಾ ಹಕ್ಲಾಡಿ ಭರತನಾಟ್ಯ ರಂಗಪ್ರವೇಶ

by Kundapur Xpress
Spread the love

ಕುಂದಾಪುರ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಗುರು ವಿದುಷಿ ಶ್ರೀಮತಿ ಭಾಗೀರಥಿ ಎಮ್. ರಾವ್‌ರವರ ಶಿಷ್ಯ ಶ್ರೀಮತಿ ಗೀತಾ ಮತ್ತು ಶ್ರೀ ಸುರೇಶ ಹಕ್ಲಾಡಿ ಇವರು ಪುತ್ರಿ ಕುಮಾರಿ ಸಮೀಕ್ಷಾ ಹಕ್ಲಾಡಿ ಭರತನಾಟ್ಯ ರಂಗಪ್ರವೇಶದ ವೇದಿಕೆ ಮೇ.31ರಂದು ಭಾನುವಾರ ಸಂಜೆ 6 ಗಂಟೆಗೆ ಕುಂದಾಪುರ ಹೋಟೆಲ್ ಶರೋನ್ ಮಿನಿಹಾಲ್ ನಲ್ಲಿ ನಡೆಯಲಿದೆ.

ಪ್ರತಿಭಾವಂತ ಕಲಾವಿದೆ ಕುಮಾರಿ ಸಮೀಕ್ಷಾ ಸುರೇಶ್ ಹಕ್ಲಾಡಿ ಭರತನಾಟ್ಯ ರಂಗಪ್ರವೇಶಡಾ. ಗಂಗೂಬಾಯಿ ಹಾನಗಲ್ಲ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು ಇಲ್ಲಿ ನಡೆದ ಭರತನಾಟ್ಯ ಜೂನಿಯರ್ ವಿಭಾಗದಲ್ಲಿ ಡಿಸ್ಟಿಂಕ್ಷನ್ ಪಡೆದಿರುತ್ತಾಳೆ

ಗುರು ವಿದುಷಿ ಶ್ರೀಮತಿ ಭಾಗೀರಥಿ ಎಮ್. ರಾವ್ ಪರಿಚಯ

ದಿವಂಗತ ಯು ಜಯರಾಮ ರಾವ್ ಹಾಗೂ ಶ್ರೀಮತಿ ನವೀನಮ್ಮನವರ ಪುತ್ರಿ, ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ತನ್ನ ಬಿ.ಕಾಂ. ಪದವಿಯನ್ನು ಪಡೆದರು, ಇವರು ತನ್ನ 8ನೇ ತರಗತಿಯಲ್ಲಿ ಭರತನಾಟ್ಯ ತರಗತಿಯನ್ನು ಸೇರಿಕೊಂಡು ಹೆಸರಾಂತ ನೃತ್ಯ ವಿದ್ವಾನ್ ಪದವಿಯನ್ನು ಪಡೆದಿರುವ ದಿವಂಗತ ಶ್ರೀ ಶ್ರೀನಿವಾಸ ಮಧ್ಯಸ್ಥರು ಕೋಣೆ ಹಾಗೂ ಶ್ರೀ ಗಣಪಯ್ಯ ಮಧ್ಯಸ್ಥರ ನೆಚ್ಚಿನ ಶಿಷ್ಠೆಯಾಗಿ ವಿದುಷಿ ಪದವಿಯನ್ನು ಪಡೆದು ಸಾಲಿಗ್ರಾಮ, ಕೋಟೇಶ್ವರ ಹಾಗೂ ಕುಂದಾಪುರದಲ್ಲಿ ಶ್ರೀ ನಟರಾಜ ನೃತ್ಯ ನಿಕೇತನ ಎಂಬ ಹೆಸರಿನಲ್ಲಿ ನೃತ್ಯ ಸಂಸ್ಥೆಯನ್ನು ತೆರೆದು ಸುಮಾರು ಸಾವಿರ ಸಾವಿರ ಮಕ್ಕಳಿಗೆ ಭರತನಾಟ್ಯ ಹೇಳಿಕೊಡುವುದಲ್ಲದೇ, ಉತ್ತಮ ಯಕ್ಷಗಾನ ಕಲಾವಿದೆಯಾಗಿ ಸುಮಾರು 500 ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ನೀಡಿರುತ್ತಾರೆ. ಅಲ್ಲದೆ ಉತ್ತಮ ನಾಟಕ ಕಲಾವಿದೆಯಾಗಿ ಹೊರಹೊಮ್ಮಿದ್ದಾರೆ. ಭರತನಾಟ್ಯವೇ ತನ್ನ ಉಸಿರು ಎಂದು ನೆಚ್ಚಿಕೊಂಡಿರುವ ಇವರಿಗೆ ಹಲವಾರು ಪ್ರಶಸ್ತಿ, ಸಮ್ಮಾನಗಳು ಆರಸಿಕೊಂಡು ಬಂದಿದೆ.

ಇವರಿಗೆ ರಂಗಭೂಮಿ ಜೋಗಫಾಲ್ಸ್ ನಲ್ಲಿ 3 ಬಾರಿ ರಾಜ್ಯ ಪ್ರಶಸ್ತಿ, 2023ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಾಧಕ ಮಹಿಳಾ ಪ್ರಶಸ್ತಿ -2024, ಶ್ರೀ ಗುರುನರಸಿಂಹ ಅನುಗ್ರಹ ಪ್ರಶಸ್ತಿ – 2024, ವಾಸುದೇವ ಸಾಮಗ ಸಂಸ್ಕರಣ ಪ್ರಶಸ್ತಿ 2024, ಬ್ರಾಹ್ಮರಿ ನಾಟ್ಯಾಲಯ ಪ್ರಶಸ್ತಿ, ಈತ ಲಾಸ್ಯ ಪ್ರಶಸ್ತಿ, ಸಮಗ್ರ ಕಂಸ (ಏಕವ್ಯಕ್ತಿ ಪ್ರದರ್ಶನ) ರೋಟರಿ ಕ್ಲಬ್ (ಕೋಟ, ತೆಕ್ಕಟ್ಟೆ, ಸಾಲಿಗ್ರಾಮ) ಸಮ್ಮಾನ, ಯಶಸ್ತಿ ಕಲಾಕೇಂದ್ರ ಸಮಾನ, ಯಕ್ಷನೂಪುರ ಭರತ ಪ್ರಶಸ್ತಿ (ನೀಲಾವರ), ನಟೇಶ ಪ್ರಶಸ್ತಿ (ಉಚ್ಚಿಲ), ಶ್ರೀ ರವಿಶಂಕರ ಗುರೂಜಿ (ಆರ್ಟ್ ಆಫ್ ಲಿವಿಂಗ್) – ಗೌರವ ಸಮ್ಮಾನ ಹೀಗೆ ಹಲವಾರು ಪ್ರಶಸ್ತಿ, ಗೌರವ ಸಮ್ಮಾನದೊಂದಿಗೆ ಭರತನಾಟ್ಯ, ಯಕ್ಷಗಾನ, ನಾಟಕ, ಏಕವ್ಯಕ್ತಿ ಅಭಿನಯ, ಹಾಡುಗಾರಿಕೆ, ಸಿನಿಮಾ ಹಾಗೆ ಅನೇಕ ಪ್ರಾಕಾರಗಳಲ್ಲಿ ಮಿಂಚಿ, ಆಪಾರ ಶಿಷ್ಯರು ಹಾಗೂ ಅಭಿಮಾನಿ ಬಳಗವನ್ನು ಹೊಂದಿದ ಕೀರ್ತಿ ಇವರದ್ದು.

 

Related Articles

error: Content is protected !!