121
ಕೈಕಂಬ : ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಬಜಪೆ ಶಾಂತಿಗುಡ್ಡೆ ನಿವಾಸಿಗಳಾದ ಅಬ್ದುಲ್ ಸಫಾನ್ (29), ನಿಯಾಜ್ (25), ಮೊಹಮ್ಮದ್ ಮುಸಮೀರ್ (32), ಕಳವಾರು ಕುರ್ಸಗುಡ್ಡೆ ಖಲಂದರ್ ಶಾಫಿ (29), ಬಾಳ ಮಂಗಳಪೇಟೆಯ ಆದಿಲ್ ಮೆಹರೂಫ್ (27), ಚಿಕ್ಕಮಗಳೂರು ಕಳಸದ ನಾಗರಾಜ್ (20), ಜೋಕಟ್ಟೆ ತೊಕೂರಿನ ಮೊಹಮ್ಮದ್ ರಿಜ್ವಾನ್ (28) ಮತ್ತು ಚಿಕ್ಕಮಗಳೂರು ಕಳಸ ರುದ್ರಪಾದೆಯ ರಂಜಿತ್ (19) ಎಂಬವರನ್ನು ಘಟನೆ ನಡೆದ ಕಿನ್ನಿಪದವು ಮತ್ತುಅವರ ಮನೆಗಳಿಗೆ ಮಂಗಳವಾರ ಪೊಲೀಸರು ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿ ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದಾರೆ

