Home » ಶಾಲೆಯ ಪುಟಾಣಿಗಳ ಪದವಿ ಪ್ರದಾನ
 

ಶಾಲೆಯ ಪುಟಾಣಿಗಳ ಪದವಿ ಪ್ರದಾನ

by Kundapur Xpress
Spread the love

ಕುಂದಾಪುರ :ಕೋಟೇಶ್ವರ ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಯುಕೆಜಿ ಮಕ್ಕಳ ಪದವಿ ಪ್ರದಾನ ಸಮಾರಂಭ ದಿನಾಂಕ 31-03-2023 (ಶುಕ್ರವಾರ) ಜರುಗಿತು . ಮಕ್ಕಳಿಗೆ ಬೇಕಿರುವುದು ಪ್ರೀತಿ ಮತ್ತು ಪ್ರೋತ್ಸಾಹದ ಮಾತುಗಳು ಮಾತ್ರ ಅದನ್ನು ಶಿಕ್ಷಕರು ನೀಡುತ್ತಿದ್ದಾರೆ. ಪೋಷಕರು ಯಾವುದೇ ಕಾರಣಕ್ಕೂ ನಿಮ್ಮ ಮಕ್ಕಳನ್ನು ಬೇರೆ ಮಕ್ಕಳ ಜೊತೆ ಹೋಲಿಕೆ ಮಾಡುವ ತಪ್ಪು ಕೆಲಸ ಮಾಡಬೇಡಿ , ಮಕ್ಕಳಿಗೆ ಅವರ ಕೆಲಸ ಗಳನ್ನು ಅವರೇ ಮಾಡಿಕೊಳ್ಳುವಂತೆ‌ ಪ್ರೇರೇಪಿಸಿ ಜೊತೆಗೆ ಅವರಿಗೆ ನೀಡುವ ಆಹಾರ ಪದಾರ್ಥಗಳ ಮೇಲೂ ಗಮನ ನೀಡಿ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ  ಬಸ್ರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ,  ಡಾ.ರಶ್ಮಿ ಇವರು ತಿಳಿಸಿದರು.  ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಭಯವಿಲ್ಲದೆ ಎಲ್ಲರ ಮುಂದೆ ಬಂದು ತಮ್ಮ ವಿದ್ಯಾರ್ಥಿ ಜೀವನದ ಅನುಭವ ಹಂಚಿಕೊಳ್ಳುವುದು ಪ್ರಶಂಸನೀಯ

ಈ ಮಕ್ಕಳಿಗೆ ಬೇಕಿರುವುದು ಕೇವಲ ಪ್ರೀತಿ  ಅದನ್ನು ಮಕ್ಕಳು ಮನೆಯ ಸದಸ್ಯರಿಂದ ಪಡೆಯಬಹುದು ಇಲ್ಲಾ ಸಮಾಜದಿಂದ ಹೇಗೆ ಪಡೆಯುತ್ತಾರೆ ಎನ್ನುವುದನ್ನು ಸಣ್ಣ ಕಥೆಯೊಂದಿಗೆ ಪೋಷಕರಿಗೆ ಗುರುಕುಲ ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕಿ ಅನುಪಮಾ ಎಸ್.ಶೆಟ್ಟಿ ಯವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ತಿಳಿಸಿದರು.ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀ ಮೋಹನ್.ಕೆ, ಸಂಯೋಜಕಿ ವಿಶಾಲಾ ಶೆಟ್ಟಿ , ಶಿಕ್ಷಕಿಯರು ,ಮಕ್ಕಳು ಮತ್ತು ಪಾಲಕರು ಉಪಸ್ಥಿತರಿದ್ದರು . ಕಾರ್ಯಕ್ರಮವನ್ನು ಮಾಸ್ಟರ್ ಅಥರ್ವ, ಕುಮಾರಿ.ತನಿಷ್ಕಾ. ನಿರೂಪಿಸಿ, ಕುಮಾರಿ.ಅಭೀಷ್ಟಾ ಸ್ವಾಗತಿಸಿ , ಮಾಸ್ಟರ್.ಲಕ್ಷಿತ್ ವಂದಿಸಿದರು

 

   

Related Articles

error: Content is protected !!