ಸಾವು ಈ ಪದವನ್ನು ಕೇಳಿದ ಕೂಡಲೇ ಮನುಷ್ಯ ಒಂದು ಸಲ ಭಯ ಬೀಳುತ್ತಾನೆ. ಮನುಷ್ಯ ಯಾವುದಕ್ಕೆ ಹೆದರದಿದ್ದರೂ ಸಾವು ಎಂಬ ಪದಕ್ಕೆ ಹೆದರುವುದು ಖಂಡಿತ . ಹಾಗಾದರೆ ಸಾವು ಎಂಬುದು ಬಂದಾಗ ನಾವು ಅದರಿಂದ ಸಂಭ್ರಮಿಸಬಹುದೇ? ಸಾವನ್ನು ಆತ ಸ್ವಾಗತಿಸುತ್ತಾದಿದ್ದಾನೆ ಎಂದರೆ ಆತನಿಗೆ ಜ್ಞಾನೋದಯವಾಗಿ ಆತ್ಮ ಸಾಕ್ಷಾತ್ಕಾರ ಆಗಿ ಆತ ಯೋಗಿಯಾಗಿದ್ದಾನೆ ಎಂದರ್ಥ . ಆತ್ಮ ದೇಹದಲ್ಲಿ ಇರುವವರೆಗೆ ಮಾತ್ರ ದೇಹಕ್ಕೆ ಒಂದು ಬೆಲೆ . ಆತ್ಮ ದೇಹವನ್ನು ಬಿಟ್ಟು ಹೋದ ತಕ್ಷಣ ದೇಹಕ್ಕೆ ಹೆಣ ಎಂದು ಕರೆಯುತ್ತಾರೆ. ಹಾಗಾದ್ರೆ ನಮ್ಮ ದೇಹದ ಮೇಲೆ ನಮಗೆ ಅಷ್ಟೊಂದು ವ್ಯಾಮೋಹವೇ? ಪಂಚಭೂತಗಳಿಂದ ಬಂದಂತ ದೇಹ ಪಂಚಭೂತಗಳಲ್ಲಿ ಸೇರುವುದು ಖಂಡಿತ .
ಭಗವದ್ಗೀತೆಯಲ್ಲಿ ಹೇಳಿದಂತೆ ದೇಹವೆಂಬುದು ಆತ್ಮಕ್ಕೆ ಬಟ್ಟೆ ಇದ್ದಂತೆ . ಆತ್ಮವು ಪುನರ್ಜನ್ಮವೆಂಬ
ಪ್ರಕ್ರಿಯೆ ಬಂದಾಗ ಒಂದು ದೇಹದಿಂದ ಹೊರಬಂದು ತನ್ನ ಪೂರ್ವಜನ್ಮದ ಕರ್ಮಗಳಿಗನುಸಾರವಾಗಿ ಇನ್ನೊಂದು ದೇಹವನ್ನು ಪ್ರವೇಶಿಸುತ್ತದೆ .
ಶ್ರೀ ಕೃಷ್ಣನ ಹೇಳಿದಂತೆ ಪರಮಾತ್ಮನಿಗೆ ಮಾತ್ರ ತಾನು ಪಡೆದಂತ ಪ್ರತಿಯೊಂದು ಜನ್ಮದ ನೆನಪಿರುತ್ತದೆ. ಆತ್ಮವು ತನ್ನ ಕರ್ಮಗಳಿಗನುಸಾರವಾಗಿ ಹೊಸ ದೇಹವನ್ನು ಪ್ರವೇಶಿಸಿದಾಗ ತನ್ನ ಮೊದಲ ಜನ್ಮದ ರಹಸ್ಯವನ್ನು ಮರೆಯುತ್ತದೆ . ಆತ್ಮ ಸಾಕ್ಷಾತ್ಕಾರವೆಂದರೆ ಜ್ಞಾನೋದಯ ಎಂದರ್ಥ.ಆತ್ಮಕ್ಕೆ ಜ್ಞಾನೋದಯವಾಗಬೇಕಾದರೆ ನಿರಂತರ ತಪಸ್ಸು ಬೇಕಾಗಿರುತ್ತದೆ . ಆತ್ಮ ದೇಹಕ್ಕೆ ಒಡೆಯ ಪರಮಾತ್ಮ ಸೃಷ್ಟಿಗೆ ಒಡೆಯ. ಒಂದು ದೇಹದಿಂದ ಇನ್ನೊಂದು ದೇಹಕ್ಕೆ ಆತ್ಮದ ಪಯಣವನ್ನು ಪುನರ್ಜನ್ಮ ಎನ್ನುವುದು . ನಾವು ಮಾಡಿದ ಕಾರ್ಯಗಳಿಂದಾಗಿ ನಮ್ಮ ಕರ್ಮವು ಆತ್ಮಕ್ಕೆ ಅಂಟಿಕೊಂಡು ನಮ್ಮ ಪೂರ್ವಜನ್ಮದ ಕರ್ಮಗಳಿಗನುಸಾರ ನಮ್ಮ ಆತ್ಮವು ಹೊಸ ಜನ್ಮವನ್ನು ಪಡೆದುಕೊಳ್ಳುತ್ತದೆ ಎಂದು ಪುರಾಣಗಳಲ್ಲೂ ಉಲ್ಲೇಖಿಸಲಾಗಿದೆ .ಮನುಷ್ಯ ಯಾವುದಕ್ಕೆ ಹೆದರದಿದ್ದರೂ ಸಾವು ಎಂಬ ಪದಕ್ಕೆ ಹೆದರುವುದು ಖಂಡಿತ . ಹಾಗಾದರೆ ಸಾವು ಎಂಬುದು ಬಂದಾಗ ನಾವು ಅದರಿಂದ ಸಂಭ್ರಮಿಸಬಹುದೇ?
ಸಾವನ್ನು ಆತ ಸ್ವಾಗತಿಸುತ್ತಾದಿದ್ದಾನೆ ಎಂದರೆ ಆತನಿಗೆ ಜ್ಞಾನೋದಯವಾಗಿ ಆತ್ಮ ಸಾಕ್ಷಾತ್ಕಾರ ಆಗಿ ಆತ ಯೋಗಿಯಾಗಿದ್ದಾನೆ ಎಂದರ್ಥ . ಆತ್ಮ ದೇಹದಲ್ಲಿ ಇರುವವರೆಗೆ ಮಾತ್ರ ದೇಹಕ್ಕೆ ಒಂದು ಬೆಲೆ . ಆತ್ಮ ದೇಹವನ್ನು ಬಿಟ್ಟು ಹೋದ ತಕ್ಷಣ ದೇಹಕ್ಕೆ ಹೆಣ ಎಂದು ಕರೆಯುತ್ತಾರೆ. ಹಾಗಾದ್ರೆ ನಮ್ಮ ದೇಹದ ಮೇಲೆ ನಮಗೆ ಅಷ್ಟೊಂದು ವ್ಯಾಮೋಹವೇ? ಪಂಚಭೂತಗಳಿಂದ ಬಂದಂತ ದೇಹ ಪಂಚಭೂತಗಳಲ್ಲಿ ಸೇರುವುದು ಖಂಡಿತ .ಭಗವದ್ಗೀತೆಯಲ್ಲಿ ಹೇಳಿದಂತೆ ದೇಹವೆಂಬುದು ಆತ್ಮಕ್ಕೆ ಬಟ್ಟೆ ಇದ್ದಂತೆ . ಆತ್ಮವು ಪುನರ್ಜನ್ಮವೆಂಬ ಪ್ರಕ್ರಿಯೆ ಬಂದಾಗ ಒಂದು ದೇಹದಿಂದ ಹೊರಬಂದು ತನ್ನ ಪೂರ್ವಜನ್ಮದ ಕರ್ಮಗಳಿಗನುಸಾರವಾಗಿ ಇನ್ನೊಂದು ದೇಹವನ್ನು ಪ್ರವೇಶಿಸುತ್ತದೆ .
ಶ್ರೀ ಕೃಷ್ಣನ ಹೇಳಿದಂತೆ ಪರಮಾತ್ಮನಿಗೆ ಮಾತ್ರ ತಾನು ಪಡೆದಂತ ಪ್ರತಿಯೊಂದು ಜನ್ಮದ ನೆನಪಿರುತ್ತದೆ. ಆತ್ಮವು ತನ್ನ ಕರ್ಮಗಳಿಗನುಸಾರವಾಗಿ ಹೊಸ ದೇಹವನ್ನು ಪ್ರವೇಶಿಸಿದಾಗ ತನ್ನ ಮೊದಲ ಜನ್ಮದ ರಹಸ್ಯವನ್ನು ಮರೆಯುತ್ತದೆ . ಆತ್ಮ ಸಾಕ್ಷಾತ್ಕಾರವೆಂದರೆ ಜ್ಞಾನೋದಯ ಎಂದರ್ಥ. ಆತ್ಮಕ್ಕೆ ಜ್ಞಾನೋದಯವಾಗಬೇಕಾದರೆ ನಿರಂತರ ತಪಸ್ಸು ಬೇಕಾಗಿರುತ್ತದೆ . ಆತ್ಮ ದೇಹಕ್ಕೆ ಒಡೆಯ ಪರಮಾತ್ಮ ಸೃಷ್ಟಿಗೆ ಒಡೆಯ. ಒಂದು ದೇಹದಿಂದ ಇನ್ನೊಂದು ದೇಹಕ್ಕೆ ಆತ್ಮದ ಪಯಣವನ್ನು ಪುನರ್ಜನ್ಮ ಎನ್ನುವುದು . ನಾವು ಮಾಡಿದ ಕಾರ್ಯಗಳಿಂದಾಗಿ ನಮ್ಮ ಕರ್ಮವು ಆತ್ಮಕ್ಕೆ ಅಂಟಿಕೊಂಡು ನಮ್ಮ ಪೂರ್ವಜನ್ಮದ ಕರ್ಮಗಳಿಗನುಸಾರ ನಮ್ಮ ಆತ್ಮವು ಹೊಸ ಜನ್ಮವನ್ನು ಪಡೆದುಕೊಳ್ಳುತ್ತದೆ ಎಂದು ಪುರಾಣಗಳಲ್ಲೂ ಉಲ್ಲೇಖಿಸಲಾಗಿದೆ .
ಪ್ರದೀಪ್ ಕುಮಾರ್ ,ಕೋಮುಂಜೆ

